ವಾಸ್ತು ವಿಧಾನಕಲ್ಪ / Vaastu Vidhaanakalpa
₹300.00
ಶ್ರೀ ಕೆ . ಪಿ . ಶಂಕರ ಸೋಮಯಾಜಿ
' ವಾಸ್ತು ವಿಧಾನಕಲ್ಪ 'ವು ವಾಸ್ತುಶಾಂತಿ ಪ್ರಯೋಗ ಮಂಜರಿಯಾಗಿದೆ. ಇದರಲ್ಲಿ ಋಗೈದೀಯ, ಮನುಪ್ರೋಕ್ತ, ಬೋಧಾಯನೀಯ, ವೆಂಕಟೇಶೀಯ, ಶುಕ್ಲ ಯಜುರ್ವೇದೀಯ ವಾಸ್ತು ಮಂತ್ರ ಪ್ರಯೋಗ ನಿರೂಪಿತವಾಗಿವೆ. ವಾಸ್ತುಪೂಜಾವಿಧಾನ, ವಾಸ್ತುಶಾಂತಿ, ಗೃಹಶಾಂತಿ ಹೋಮ, ರಾಕ್ಷೆಘ್ನ ಹೋಮಗಳಲ್ಲದೆ 'ವಾಸ್ತುವಿಧಾನಕಲ್ಪ'ದಲ್ಲಿದೆ. ತಂತ್ರಾಗಮೋಕ್ತ ವಾಸ್ತುಪೂಜಾವಿಧಾನ
ನೂತನ ಮನೆಯ ಪ್ರವೇಶ ಮಾಡುವಾಗ ವಾಸ್ತುಶಾಂತಿ ನಡೆಸುವದು ಅತ್ಯಗತ್ಯವಾಗಿದೆ. ಮನೆಯಲ್ಲಿ ನಡೆಯುವ ಸಕಲ ಶುಭ ಕಾರ್ಯಗಳಲ್ಲಿ ವಾಸ್ತುಪೂಜೆ ಮಾಡುವದು ಸಂಪ್ರದಾಯವಾಗಿದೆ. ವಾಸ್ತು ಪುರುಷನಿಗಾಗಿ ನಡೆಸುವ ಹೋಮದಿಂದ ಗ್ರಹಶಾಂತಿ ಸಾಧ್ಯವಾಗುತ್ತದೆ. ಮನೆಯ ಸುಖ ಶಾಂತಿ ಸಮೃದ್ಧಿಗೆ ವಾಸ್ತುಪುರುಷನ ಕೃಪೆ ಅತ್ಯವಶ್ಯಕ. ಭಾರತೀಯ ಸನಾತನ ಪರಂಪರೆಯಲ್ಲಿ ವಾಸ್ತುಪೂಜೆಯ ಶ್ರೇಷ್ಠವಾದ ವಿಧಾನಗಳಿವೆ. ವಾಸ್ತುಪ್ರವೇಶಕ್ಕೆ ಅತ್ಯಂತ ಉಪಯಕ್ತವಾದ ಮಂತ್ರ, ಪ್ರಯೋಗ ವಿಧಾನವನ್ನು ಪಂಡಿತ ಕೆ. ಪಿ. ಶಂಕರ ಸೋಮಯಾಜಿಗಳು ವಿವಿಧ ಮೂಲಗಳಿಂದ ಸಂಪಾದಿಸಿ ಇ ಗ್ರಂಥದಲ್ಲಿ ಕೊಟ್ಟಿದ್ದಾರೆ. ಪರಂಪರಾಗತವಾಗಿ ವೇದಾಗಮ ಶಾಸ್ತ್ರವನ್ನು ಅಧ್ಯಯನ ಮಾಡಿದ ಪಂಡಿತ ಕೆ. ಪಿ. ಶಂಕರ ಸೋಮಯಾಜಿಗಳ 'ವಾಸ್ತುವಿಧಾನಕಲ್ಲ' ಭಾರತೀಯ ಮಂತ್ರ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯಾಗಿದೆ.
Quantity
Only 2 left in stock
ಲೇಖಕರು
ಶ್ರೀ ಕೆ . ಪಿ . ಶಂಕರ ಸೋಮಯಾಜಿ
ಪ್ರಕಾಶನ
ಶ್ರೀ ಭಗವತ್ಪಾದ ಪ್ರಕಾಶನ
ಪುಟಗಳು
426

















